ಕೊಣಾಜೆ: ಬೈಕ್ ಅಪಘಾತ ಆಗಿ ಬಾಲಕ ಮೃತ್ಯು
ಉಳ್ಳಾಲ(31ಆಗಷ್ಟ್/2020): ಬೈಕ್ ಅಪಘಾತ ಆಗಿ ಬಾಲಕ ಮೃತ್ಯು. ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಬಳಿ ಬೈಕ್ ಅಪಘಾತದಲ್ಲಿ ಬಾಲಕನೊರ್ವ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ.
ಮೃತನನ್ನು ಪಜೀರು ಪೆರ್ನಂಪ್ಪಾಡಿಯ ಬಶೀರ್ ಅವರ ಪುತ್ರ ಶಾಲಿಕ್ (15) ಎಂದು ಗುರುತಿಸಲಾಗಿದೆ. ಶಾಲಿಕ್ ತನ್ನ ತಂದೆಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಮಗುಚಿ ಬಿದ್ದಿದೆ. ಈ ಸಂದರ್ಭದಲ್ಲಿ ತಲೆಗೆ ಗಂಭೀರ ಗಾಯವಾಗಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.