ಮರ್ ಹೂಂ ಬೇಕಲ ಉಸ್ತಾದರಿಗೆ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ನುಡಿ ನಮನ
ಉಳ್ಳಾಲ(27ಸೆ/2020): ಮನುಷ್ಯನಿಗೆ ಹುಟ್ಟು ಸಾವು ನಿಶ್ಚಿತ, ಆದರೆ
ಜಾತ್ಯಾತೀತ ತತ್ವ ಸಿದ್ಧಾಂತಗಳ ಪ್ರತಿಪಾದಕರಾಗಿದ್ದ ಬೇಕಲ ಉಸ್ತಾದ್ ಅಗಲಿಕೆ ಸಮಾಜಕ್ಕೆ ನಷ್ಟವಾಗಿದ್ದು ಅಂತಹ ವ್ಯಕ್ತಿಗಳು ಇನ್ನಷ್ಟು ವರ್ಷ ನಮ್ಮೊಂದಿಗಿರಬೇಕಿತ್ತು ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ ಖೇದ ವ್ಯಕ್ತಪಡಿಸಿದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಡಿಪುವಿನಲ್ಲಿ ಭಾನುವಾರ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ನುಡಿನಮನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಕಲ ವ್ಯಕ್ತಿ ಎನ್ನುವುದು ಓರ್ವ ವ್ಯಕ್ತಿಯಾಗಿರದೆ ದೊಡ್ಡ ಶಕ್ತಿಯಾಗಿದ್ದರು. ಅವರು ಸಂಪತ್ತು ಗಳಿಸದಿದ್ದರೂ ದೊಡ್ಡ ಪ್ರಮಾಣದ ಜನರ ಪ್ರೀತಿ ಗಳಿಸಿದ್ದರು ಎನ್ನುವುದಕ್ಕೆ ಅವರ ಅಂತಿಮ ದರ್ಶನಕ್ಕೆ ಸೇರಿದ್ದ ಜನಸ್ತೋಮ ಸಾಕ್ಷಿ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಬೇಕಲ ಉಸ್ತಾದ್ ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಳ್ಳದೆ ಸಮಾಜದ ವಿಧ್ವಾಂಸರಾಗಿದ್ದರು. ಸಮಾಜದಲ್ಲಿ ಸರ್ವಧರ್ಮೀಯರು ಸಹೋದರರಂತೆ ಜೀವಿಸಬೇಕು ಎಂದು ಬಯಸಿದ್ದ ಅವರು, ಸರ್ವರ ಮಾರ್ಗದರ್ಶಕರಾಗಿ ಜಾತ್ಯಾತೀತ ಮನೋಭಾವ ಬಿತ್ತಿದ್ದರು ಎಂದು ಅವರೊಂದಿಗಿನ ಒಡನಾಟ ನೆನಪಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಅರುಣ್ ಡಿಸೋಜ, ಮಮತಾ ಗಟ್ಟಿ, ನಾಸಿರ್ ನಡುಪದವು, ಅಬ್ದುಲ್ ಜಲೀಲ್ ಮೋಂಟುಗೋಳಿ, ಉಮ್ಮರ್ ಪಜೀರ್, ದೇವದಾಸ್ ಭಂಡಾರಿ, ಚಂದ್ರಹಾಸ ಕರ್ಕೇರ, ಸಮೀರ್ ಪಜೀರ್, ಜನಾರ್ದನ ಗಟ್ಟಿ, ಸೀತಾರಾಮ ಶೆಟ್ಟಿ ಪಜೀರ್, ಪದ್ಮನಾಭ ನರಿಂಗಾನ, ಜೋಸೆಫ್ ಕುಟಿನ್ಹಾ, ಸಿ.ಎಂ.ಶರೀಫ್ ಪಟ್ಟೋರಿ, ದಿನೇಶ್ ಮೂಳೂರು, ಡಾ.ಸುರೇಖ ಇನ್ನಿತರರು ಉಪಸ್ಥಿತರಿದ್ದರು.
ತಾ.ಪಂ. ಸದಸ್ಯ ಹೈದರ್ ಕೈರಂಗಳ ಪ್ರಾಸ್ತಾವಿಕವಾಗಿ ಮಾತನಾಡಿದರು. ರಝಾಕ್ ಕುಕ್ಕಾಜೆ ವಂದಿಸಿದರು. ಸತ್ತಾರ್ ಕೈರಂಗಳ ನಿರೂಪಿಸಿದರು.